ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹರಿಹರ ನಗರದ
ಶ್ರೀ ಹರಿಹರೇಶ್ವರ ಸಭಾ ಭವನದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಹರಿಹರ, ಹಾಗೂ ಚಿಂತನೆ ಪ್ರತಿಷ್ಠಾನ ಹರಿಹರ ಇವರ ಸಹಯೋಗದಲ್ಲಿ ಶ್ರೀ ಮತಿ ಲಲಿತಮ್ಮ ಡಾಕ್ಟರ್ ಚಂದ್ರಶೇಖರ್ ಇವರ 93 ನೇ ಜನ್ಮ ದಿನದ ಪ್ರಯುಕ್ತ ದಾವಣಗೆರೆ ಜಿಲ್ಲಾ ಮಟ್ಟದ
ಸುವರ್ಣ ಕವಿಕಾವ್ಯ ಸಿರಿ ಕವಿಗೋಷ್ಠಿ 2024 ಮತ್ತು
ಶ್ರೀ ಯುತ ಭಾ ಮ ಬಸವರಾಜಯ್ಯ ರವರಿಗೆ ಶ್ರೀ ಮತಿ ಲಲಿತಮ್ಮ ಡಾಕ್ಟರ್ ಚಂದ್ರಶೇಖರ್ ಜೀವಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಾರ್ಥನೆ ಹಾಗೂ ಗಿಡಕ್ಕೆ ನೀರು ಹಾಕೋ ಮೂಲಕ ಚಾಲನೆ ನೀಡಿದರು.
ಸ್ವಾಮಿ ಶಾರದೇಶಾನಂದಜಿ ಮಹಾರಾಜ್ ಇವರ ದಿವ್ಯ ಸನ್ನಿಧಿಯಲ್ಲಿ, ಗೌರವ ಉಪಸ್ಥಿತಿ, ಶ್ರೀ ಲಲಿತಮ್ಮ ಡಾಕ್ಟರ್ ಚಂದ್ರಶೇಖರ್, ಸಂಸ್ಥಾಪಕ ಅಧ್ಯಕ್ಷರು, ಪ್ರಗತಿಪರ ಬರಹಗಾರರ ಒಕ್ಕೂಟ ಹರಿಹರ,
ಶ್ರೀ ಯುತ ಭಾ ಮ ಬಸವರಾಜಯ್ಯ ಪ್ರಶಸ್ತಿ ಪುರಸ್ಕೃತರು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶ್ರೀ ಯುತ ಸುಬ್ರಹ್ಮಣ್ಯ ನಾಡಿಗೇರ, ವಹಿಸಿದ್ದರು
ಮುಖ್ಯ ಅತಿಥಿಗಳು,
ಶ್ರೀ ಯುತ ವಾಮದೇವಪ್ಪ, ಜಿಲ್ಲಾಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ, ಪ್ರೊಸೆಸರ್ ಸಿ ವಿ ಪಾಟೀಲ್ ,ನಿವ್ಪತ್ತ ಕನ್ನಡ ಪ್ರಾಧ್ಯಾಪಕರು ಹರಿಹರ,ಈ ಸಂದರ್ಭದಲ್ಲಿ ಸ್ವಾಮಿಜಿ, ಸಂಸ್ಥಾಪಕರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.