ಹರ್ಯಾಣದ ರೋಹ್ಟಕ್ನಲ್ಲಿ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತಿ ಹಿಮಾನಿ ನರ್ವಾಲ್ ಅವರ ಮೃತದೇಹ ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಈ ಘಟನೆ ಸಂಪ್ಲಾ ಬಸ್ ನಿಲ್ದಾಣದ ಬಳಿ ನಡೆದಿದ್ದು, ನಾಗರಿಕರು ಸೂಟ್ಕೇಸ್ನಲ್ಲಿ ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದಾಗ, ಸೂಟ್ಕೇಸ್ನೊಳಗೆ ಹಿಮಾನಿ ನರ್ವಾಲ್ ಅವರ ಮೃತದೇಹ ಪತ್ತೆಯಾಯಿತು.ಹಿಮಾನಿ ನರ್ವಾಲ್ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ರೋಹ್ಟಕ್ನ ವಿಜಯ ನಗರದ ನಿವಾಸಿಯಾದ ಅವರ ಕುತ್ತಿಗೆಯನ್ನು ದುಪಟ್ಟಾದಿಂದ ಬಿಗಿಯಲಾಗಿತ್ತು ಮತ್ತು ಅವರ ಕೈಗಳಲ್ಲಿ ಮೆಹಂದಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತನಿಖೆಯ ಪ್ರಕಾರ, ಹಿಮಾನಿ ಅವರನ್ನು ದುಪಟ್ಟಾದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.ಈ ಘಟನೆ ಹರ್ಯಾಣ ರಾಜ್ಯಾದ್ಯಂತ 33 ಸಂಸ್ಥೆಗಳಿಗೆ ನಡೆದ ಪುರಸಭೆ ಚುನಾವಣೆಗಳ ಮುನ್ನಾದಿನದಲ್ಲಿ ಸಂಭವಿಸಿದೆ. ಚುನಾವಣಾ ಫಲಿತಾಂಶ ಮಾರ್ಚ್ 12ರಂದು ಘೋಷಿಸಲಾಗುವುದು. ದಾವಣಗೆರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ ಹಾಗೂ ಪೊಲೀಸರು ಈ ಸಂಬಂಧವಾಗಿ ವಿವರವಾದ ತನಿಖೆ ನಡೆಸಬೇಕು ಮತ್ತು ಘಟನೆಯ ಹಿನ್ನೆಲೆ ಮತ್ತು ಕೊಲೆಗೆ ಕಾರಣವಾದ ಸನ್ನಿವೇಶಗಳನ್ನು ತಿಳಿಯಲು ನಿಷ್ಠಾವಂತ ಪ್ರಯತ್ನ ಮಾಡಬೇಕು. ಹಿಮಾನಿ ನರ್ವಾಲ್ ಅವರ ಕುಟುಂಬ ಮತ್ತು ಯುವ ಕಾಂಗ್ರೆಸ್ ಮುಖಂಡರುಗಳ ನೇತೃತ್ವವು ನ್ಯಾಯದ ಬೇಡಿಕೆಯನ್ನು ಮುಂದಿಟ್ಟಿದೆ.ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಲ್. ಎಂ. ಹೆಚ್. ಸಾಗರ್ ರವರು ಹಾಗೂ ಯುವ ಕಾಂಗ್ರೆಸ್ ಸಮಿತಿ ಮುಖಂಡರುಗಳಾದ ಶಿವರತನ್ , ನವೀನ್ ನಲವಡಿ , ಬಿಲಾಲ್ , ಪ್ರವೀಣ್ ಎಸ್. ಕೆ., ಬಾಷಾ, ಸಮೀರ್, ಗಣೇಶ್, ಸಬೀಲ್, ಆಫ್ತಾಬ್ , ಹಾಲೆಶ್ , ಶಂಕರ್, ಹರ್ಷ, ಮಂಜುನಾಥ್ ಶಾಂತಿನಗರ ಉಪಸ್ಥಿತರಿದ್ದರು.