ವಕ್ಫ್ ತಿದ್ದುಪಡಿ ಮಸೂದೆ-2024 ನ್ನು ವಿರೋಧಿಸಿ ಹಾಗೂ ಹಿಂಪಡೆಯುವಂತೆ ಅಗ್ರಹಿಸಿ ಈದ್ಗಾದಲ್ಲಿ ರಂಜಾನ್ ಈದ್ ಪ್ರಯುಕ್ತ ಬಿತ್ತಿ ಪತ್ರ ಪ್ರದರ್ಶಿಸಲಾಯಿತು”.*ಹರಿಹರ : ಮಾರ್ಚ್ 31, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ-2024 ನ್ನು ವಿರೋಧಿಸಿ ಹಾಗೂ ಹಿಂಪಡೆಯುವಂತೆ ಅಗ್ರಹಿಸಿ ಮತ್ತು ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಮ್. ಕೆ. ಫೈಝಿ ರವರ ತಕ್ಷಣ ಬಿಡುಗಡೆಗೆ ಆಗ್ರಹಿಸಿ ಹರಿಹರದ ವಿವಿಧ ಈದ್ಗಾಗಳಲ್ಲಿ ರಂಜಾನ್ ಈದ್ ಸಂದರ್ಭದಲ್ಲಿ ಬಿತ್ತಿ ಪತ್ರ ಪ್ರದರ್ಶನ ಮತ್ತು ಕರಪತ್ರಗಳನ್ನು ವಿತರಿಸಲಾಯಿತು.ಬಿಜೆಪಿ ನೇತೃತ್ವ ಒಕ್ಕೂಟ ಸರ್ಕಾರ ತನ್ನ ಅಧಿಕಾರದ ಪ್ರಾರಂಭದಿಂದಲೇ ಮುಸ್ಲಿಂ ವಿರೋಧಿ ನೀತಿಯನ್ನು ಕಾರ್ಯತಂತ್ರವನ್ನಾಗಿಸಿದೆ. ತನ್ನ ಸರ್ಕಾರದ ಶೋಚನೀಯ ವೈಫಲ್ಯಗಳನ್ನು ಮರೆಮಾಚಲು ಇನ್ನಿಲ್ಲದ ಹತಾಶ ಪ್ರಯತ್ನ ನಡೆಸುತ್ತಿದೆ. ಅಧಿಕಾರದಲ್ಲಿ ಮುಂದುವರೆಯಲು ನಡೆಸುವ ಕೋಮು ದೃವೀಕರಣದ ಸಲುವಾಗಿ ಯಾವತ್ತೂ ಮುಸ್ಲಿಂ ವಿರೋಧಿ ಅಜೆಂಡಗಳನ್ನು ನಿರ್ದಯವಾಗಿ ಬಳಸಿಕೊಳ್ಳುತ್ತದೆ ಎನ್ನುವುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ವಕ್ಫ್ ತಿದ್ದುಪಡಿ ಮಸೂದೆಯು ಇಂತಹ ದುಷ್ಟ ತಂತ್ರಗಳ ಭಾಗ ಹಾಗೂ ದೇಶದ ವಕ್ಫ್ ಆಸ್ತಿಗಳನ್ನು ಕಬಳಿಸುವ ಉದ್ದೇಶವನ್ನು ಹೊಂದಿದೆ ಎನ್ನುವುದು ಅರಿತುಕೊಳ್ಳಬೇಕು.ಫ್ಯಾಸಿಸ್ಟ್ ಹಾದಿಯಲ್ಲಿ ಸಾಗುತ್ತಿರುವ ಸರ್ಕಾರದ ಜನ ವಿರೋಧಿ, ಮುಸ್ಲಿಂ ವಿರೋಧಿ ಷಡ್ಯಂತರಗಳನ್ನು ಸೋಲಿಸುವುದು ದೇಶದ ನಾಗರಿಕರಾಗಿ ನಮ್ಮೆಲ್ಲರ ಕರ್ತವವಾಗಿದೆ. ರಾಜಕೀಯ ಪಕ್ಷಗಳು ಪರಸ್ಪರ ಅಭಿಪ್ರಾಯ ಭೇದಗಳನ್ನು ಮರೆತು ಒಂದಾಗಿ ವಕ್ಫ್ ಕಬಳಿಕೆ ಮಸೂದೆ ಮತ್ತು ತನಿಕ ಏಜೆನ್ಸಿ ಗಳ ಹಾಗೂ ಕರಾಳ ಕಾನೂನುಗಳ ದುರುಪಯೋಗವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕಾಗಿದೆ. ದೇಶದ ಸಂವಿಧಾನ ಪ್ರಜಾಪ್ರಭುತ್ವ ಮತ್ತು ಅನನ್ಯತೆಯನ್ನು ಬಲಪಡಿಸಬೇಕಾಗಿದೆ ಎಂದು ಆಗ್ರಹಿಸಲಾಯಿತು.ಈ ಸಮಯದಲ್ಲಿ ಹರಿಹರದ ಗಂಗಾನಗರ ಈದ್ಗಾದಲ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಸಮಿವುಲ್ಲ ಮುಲ್ಲಾ, ಕಾರ್ಯದರ್ಶಿ ಸಮೀವುಲ್ಲ ಮುಜಾವರ್, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಆರ್ ತಾಹೀರ್, ಮತ್ತು ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು. ಹಾಗೂ ಅದೇ ರೀತಿ ಹರಿಹರದಭೀಮ್ ನಗರ ಮತ್ತು ಮೆಲೆಬೆನ್ನೂರು ನಲ್ಲಿ ಕೂಡ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಿತ್ತಿ ಪತ್ರ ಪ್ರದರ್ಶನ ಹಾಗೂ ಕರಪತ್ರ ವಿತರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ವರದಿ ಮೊಹಮ್ಮದ್ ಗೌಸ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ