ಭಾರತೀಯ ಜನತಾ ಪಕ್ಷ ಹರಿಹರ ವತಿಯಿಂದ ಡಾಕ್ಟರ್ , ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜ್ಯದ ನಿಪ್ಪಾಣಿಗೆ ಆಗಮಿಸಿ ಭಾಷಣ ಮಾಡಿ ಇಲ್ಲಿಗೆ ನೂರು ವರ್ಷಗಳಾಗಿವೆ ಎಂದು ಬಿಜೆಪಿಯಿಂದ ಭೀಮ ಹೆಜ್ಜೆ ಎಂದು ಭೀಮ ರಥಯಾತ್ರೆ ಎಂಬ ವಿನೂತನ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,ಬೆಂಗಳೂರಿನಿಂದ ಆರಂಭಗೊಂಡಿದೆ ಈ ರಥೋತ್ಸವ ಎಂದು ಅಂದರೆ 12ನೇ ಏಪ್ರೀಲ್ 2025 ರಂದು ಮಧ್ಯಾಹ್ನ 2 ಗಂಟೆಗೆ ಭೀಮಯಾತ್ರೆ ರಥವು ಹರಿಹರ ನಗರಕ್ಕೆ ಆಗಮಿಸಲಿದೆ,ನಗರದ ಎಸ್ ಜೆ ವಿ ಪಿ ಕಾಲೇಜು ಮುಂಭಾಗದಿಂದ ರಥಯಾತ್ರೆಯನ್ನು ಬರಮಾಡಿಕೊಂಡು,ಹರಪನಹಳ್ಳಿ ವೃತ್ತದ ವರೆಗೆ ಕಾಲ್ನಡಿಗೆ ಮೂಲಕ ಕರೆತಂದು,ಹರಪನಹಳ್ಳಿ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ರಥಕ್ಕೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ನಂತರ ರಾಣೆಬೆನ್ನೂರು ತಾಲೂಕಿಗೆ ಬೀಳ್ಕೊಡಲಾಗುವುದು,ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಸಂಸದರು,ಜಿ ಎಂ ಸಿದ್ದೇಶ್, ಹರಿಹರ ತಾಲ್ಲೂಕಿನ ಜನಪ್ರಿಯ ಶಾಸಕರಾದ ಬಿ ಪಿ ಹರೀಶ್, ಹನಗೌಡಿ ವೀರೇಶ್, ಶ್ರೀ ನಿವಾಸ್ ದಾಸ್ ಕರಿಯಪ್ಪ, ನಾಗರಾಜ್ ಅರಣಿ ಮೇಲೇಬೆನ್ನೂರ್, ರಾಜು ರೋಕಡೆ, ಆರಾಧ್ಯ ಹಿರೇಮಠ್, ಜಿ ಗಂಗಾಧರ್, ಪರಮೇಶಿ, ಸಂತೋಷ್, ಪ್ರಭಾಕರ್ ವೈ ಬಿ, ಯೋಗೇಶ್, ಸಾಕ್ಷಿ ರಣಸಿಂಘ, ಅಂಬುಜಾ ರಾಜೋಳ್ಳಿ, ಆಶಾ ಕುಂಟೆ,ಅಂಬುಜಾ ಕಾಟವೇ, ಕೇಶವ ಎಸ್, ಗುರುನಾಥ್ ಇಟ್ಟಿಗೆ , ಮಂಜುನಾಥ್ H ,ವಕೀಲ ನಾಗರಾಜ್,ಭಾನುವಳ್ಳಿ ಮಂಜುನಾಥ್,ನಗರ ಸಭೆ ಸದಸ್ಯರು ಹನುಮಂತಪ್ಪ, ಹಾಗೂ ಇನ್ನೂ ಅನೇಕ ಗಣ್ಯರು ಯುವ ಮುಖಂಡರು, ಹಿರಿಯ ಮುಖಂಡರು ಈ ಕಾರ್ಯಕ್ರಮದ ಭಾಗವಹಿಸಿದ್ದರು.ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ