ಆಯೋಜಿಸಬೇಕಾಗಿದೆ. ನಾಯಿ ಹಿಡಿಯುವ ವ್ಯವಸ್ಥೆಯನ್ನು ಸಹ ಶೀಘ್ರವಾಗಿ ವ್ಯವಸ್ಥಿತಗೊಳಿಸಿ, ಹೆಚ್ಚುತ್ತಿರುವ ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಆನ್ಕ್ಕೆ ತಂದು, ಅವುಗಳಿಗೆ ಸಂತಾನ ಚಿಕಿತ್ಸೆ ಮಾಡಿ, ಅವುಗಳ ಸಂಖ್ಯೆಯನ್ನು ಕ್ಷೀಣಿಸುವಂತೆ ಮಾಡಬೇಕಾದ್ದು ನಾಯಿಗಳಿಗೂ ಉತ್ತಮ ಹಾಗೂ ಜನರಿಗೂ ಸಹ ಒಂದು ಭರವಸೆಯನ್ನು ತಂದಂತಾಗುತ್ತದೆ. ನಾಯಿ ಪ್ರಾಣಕ್ಕೂ ಮನುಷ್ಯನ ಪ್ರಾಣಕ್ಕೂ ವ್ಯತ್ಯಾಸವಿದೆ, ಮನುಷ್ಯನ ಪ್ರಾಣಕ್ಕೆ ಅತಿ ಹೆಚ್ಚು ಮಹತ್ವವಿರುವುದರಿಂದ ನಾಯಿಗಳನ್ನು ನಿಯಂತ್ರಿಸಿ, ಮನುಷ್ಯನನ್ನು ಕಾಪಾಡಬೇಕಾಗಿದೆ. ಇದರಲ್ಲಿ ಯಾವುದೇ ದ್ವಂದ್ವ ನೀತಿಯನ್ನು ನಾವು ಅನುಸರಿಸದೇ ಪ್ರಾಣಿಗಳನ್ನು ಸಂಭಾಳಿಸಿಕೊಂಡು, ಮನುಷ್ಯನನ್ನು ಸಹ ಸುರಕ್ಷಿತವಾಗಿಟ್ಟುಕೊಳ್ಳಬೇಕಾಗಿದೆ. ಇವೆರಡರ ಮಧ್ಯೆ ಕೆಲಸ ಮಾಡುವಂತಹ ಯೋಜನೆಗಳು ಹೆಚ್ಚಾಗಬೇಕಾಗಿದೆ ಎಂದರು.
ಹೆಚ್ಚು ಹಸಿದ ನಾಯಿಗಳು, ಆಹಾರವಿಲ್ಲದ ನಾಯಿಗಳನ್ನು ಗುರುತಿಸಿ ಅವುಗಳಿಗೆ ಸರಿಯಾದ ಆಹಾರವನ್ನು ತಲುಪಿಸಿ, ಅವುಗಳ ವರ್ತನೆಯಲ್ಲಿ ಸೌದಿ ಮಾಡಬೇಕು. ಕೆಲವೊಮ್ಮೆ ನಾಯಿಗಳಿಗೆ ಸರಿಯಾದ ಸಮಯದಲ್ಲಿ ಆಹಾರ ಸಿಗದೇ, ಮಕ್ಕಳ ಕೈಯಲ್ಲಿರುವ ಆಹಾರವನ್ನು ಕಿತ್ತುಕೊಳ್ಳಲು ಹೋಗಿ, ಮಕ್ಕಳ ಮೇಲೆ ಗಾಯಮಾಡುವ ಸಂದರ್ಭ ಉಂಟು. ಮಾಂಸ ಮಾರಾಟಗಾರರ ಸುತ್ತಮುತ್ತ, ಹೋಟೆಲ್ ಗಳು ಸುತ್ತಮುತ್ತ, ಹೆಚ್ಚು ನಾಯಿಗಳು ಸಂಗ್ರಹವಾಗಿರುತ್ತವೆ. ಅವುಗಳಿಗೆ ಆಹಾರ ಸಮಸ್ಯೆಯಾಗಿ, ಎಲ್ಲಿ ಆಹಾರ ಹೆಚ್ಚಾಗಿರುತ್ತದೆ ಅಲ್ಲಿ ಬಂದು ನಿಂತು, ಜನರನ್ನು ಕಾಡುತ್ತವೆ. ಹಾಗಾಗಿ ಇದರ ಬಗ್ಗೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡು, ಅವುಗಳಿಂದ ರಕ್ಷಣೆ ಪಡೆಯಬೇಕು ಎಂದರು.