ಕನ್ನಡಪರ ಸಂಘಟನೆಗಳು ಸೇರಿ ಕರೆ ನೀಡಿದ ಬಂದ್ಗೆ ಸ್ಪಂದಿಸಿ ಸಂಪೂರ್ಣವಾಗಿ ಯಶಸ್ವಿಗೊಳಿಸಿದ ದಾವಣಗೆರೆ ಜನತೆಗೆ ಹೋರಾಟದ ಧನ್ಯವಾದ ಸಲ್ಲಿಸಿದರು.
ಸರ್ಕಾರ ಒಂದಾದ ನಂತರ ಒಂದರ ಉನ್ನತ ಶಿಕ್ಷಣದ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಎಲ್ಲಾ ಸರ್ಕಾರಗಳು ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋಟೀಕರಣ ಮಾಡಲು ಹೊರಟಿದೆ. ಇದು ಕೇವಲ ಯುಬಿಡಿಟಿಗೆ ಸೀಮಿತವಲ್ಲ. ಮುಂದೊಂದು ದಿನ ಎಲ್ಲಾ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಇಂಥದ್ದೆ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ. ಇದು ಶಿಕ್ಷಣಕ್ಕಾಗಿ ಹೋರಾಟ ನಡೆಸಿದ ಎಲ್ಲಾ ಮಹಾನ್ ವ್ಯಕ್ತಿಗಳ ಆಶಯಕ್ಕೆ ವಿರುದ್ಧವಾಗಿದೆ. ಶಿಕ್ಷಣ ಎಂಬುದು ಅನ್ಯಾಯದ ವಿರುದ್ಧ ಹೋರಾಟ ಮಾಡಲು ಒಂದು ಆಯುಧವಾಗಿದೆ. ಹಾಗಾಗಿ ಅದನ್ನು ಕಸಿಯಲು ಬಂದರೆ ಜೀವ ಕೊಟ್ಟಾದರೂ ನಮ್ಮ ಸಾರ್ವಜನಿಕ ಶಿಕ್ಷಣ ಶಿಕ್ಷಣ ಉಳಿಸಿಕೊಳ್ಳಬೇಕು ಎಂದರು.
ಯುಬಿಡಿಟಿ ಉಳಿಸಲು ದಾವಣಗೆರೆ ಜನತೆ ಯುಬಿಡಿಟಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಸರ್ಕಾರವು 50ರಷ್ಟು ಪೇಮೆಂಟ್ ಸೀಟುಗಳನ್ನು ರದ್ದುಗೊಳಿಸದಿದ್ದಲ್ಲಿ ಇಡೀ ರಾಜ್ಯದ ವಿದ್ಯಾರ್ಥಿಗಳ ಬೃಹತ್ ಚಳುವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆನರಾ ಬ್ಯಾಂಕ್ ಎಂಪ್ಲಾಯಿ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಹಿರಿಯ ಅಧ್ಯಕ್ಷ ಹಿರೇಮಠ ಅವರು ಮಾತನಾಡಿ ದಾವಣಗೆರೆ ಜನತೆ ಒಗ್ಗಟ್ಟಾಗಿ ನಿಂತು ಇಂದಿನ ಬಂದ್ ಅಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.ಯುಬಿಡಿಟಿ ಉಳಿಯುವವರೆಗೂ ಈ ಹೋರಾಟ ಮುಂದುವರೆಯುತ್ತದೆ ಹಾಗೂ 50% ಪೇಮೆಂಟ್ ಕೋಟಾ ರದ್ದಾಗುವವರೆಗೂ ಹೋರಾಟ ನಡೆಯುತ್ತದೆ ಎಂದು ತಿಳಿಸಿದರು.
ಕರ್ನಾಟಕದ ಪ್ರಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಖ್ಯಾತಿಯ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ನಿಂದ ಶೇ.50 ಪೇಮೆಂಟ್ ಕೋಟಾ ಜಾರಿಗೊಳಿಸುವ ಮೂಲಕ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕಿಳಿದಿದೆ. ಕೂಡಲೇ ಶೇ. 50 ಪೇಮೆಂಟ್ ಕೋಟಾ ರದ್ದುಪಡಿಸಬೇಜು. ಇದರ ಜೊತೆಗೆ ಯುಬಿಡಿಟಿ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ದಾವಣಗೆರೆ ಬಂದ್ ಕರೆಗೆ ರೈತ, ಕನ್ನಡಪರ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ, ವಿನಯ್ ಕುಮಾರ್ ಅಭಿಮಾನಿಗಳ ಬಳಗ, ಮಹಿಳಾ ಸಂಘಟನೆ, ಸಿಪಿಐ, ಸಿಪಿಐ(ಎಂ) ಹಲವು ಸಂಘಟಬೆಗಳು ಸಂಪೂರ್ಣ ಬೆಂಬಲ