ದಾವಣಗೆರೆ: ಹೊಸ ಹಳ್ಳಿ ಗ್ರಾಮದ ಯುವ ರೈತ ರಾಮಪ್ಪ ಸಾಲ ಬಾಧೆ ತಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದು ರಾತ್ರಿವೇಳೆ ಹೊಸಹಳ್ಳಿ ಗ್ರಾಮದ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರಾಮಪ್ಪ ಕಳೆದ ಎರಡು ವರ್ಷಗಳಿಂದತನ್ನ ಜಮೀನಿನಲ್ಲಿ ಬೆಳೆ ಸರಿಯಾಗಿ ಬಾರದ ಸಾಲ ಹೆಚ್ಚಾದ ಹಿನ್ನೆಲೆ ಈ ಕೃತ್ಯ ಮಾಡಿಕೊಂದ್ದಾನೆ. ಲಿಂಗಾಪುರ ಪ್ರಗತಿ ಗ್ರಾಮೀಣ ಬ್ಯಾಂಕ್ ಸೇರಿದಂತೆ ಇತರೆ ಕಡೆಗಳಲ್ಲಿ ವ್ಯವಸಾಯಕ್ಕೆ ಸಾಲ ಮಾಡಿದ್ದನು. ಸಾಲ ತೀರಿಸಲು ಕಷ್ಟವಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಪತ್ನಿ ಅನಿತಾ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.