ಇಂದು ಕರ್ನಾಟಕ ಅಲ್ಪಸಂಖ್ಯಾತರ ಜನಜಾಗೃತಿ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ. ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾದ. ಕೆ ಅಬ್ದುಲ್ ಜಬ್ಬಾರ್ ಸಾಬ್. ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಖ್ಯಾತ ಬರಹಗಾರರು ಹಾಗೂ ಅಂಕಣಕಾರರು ಶಿವಸುಂದರ್ ಸರ್ ರವರು ಹಾಗೂ ಅಧ್ಯಕ್ಷರಾದ ತಾಹಿರ್ ಗನಿ ನೆರಳು ಬಿಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಬಿನಾ ಕಾನಂ ಹಾಗೂ ಮೈನುದ್ದೀನ್. ಅನೀಸ್ ಪಾಷಾ ವಕೀಲರು. ರೇಜ್ವಿ ಖಾನ್ ವಕೀಲರು ಹನೀಫ್ ಲಾಯರ್. ಸಮದ್ ಲಾಯರ್ ಹಲವರು ಸಾಮಾಜಿಕ ಚಿಂತಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರುಕಾರ್ಯಕ್ರಮವನ್ನು ಉದ್ದೇಶಿಸಿ ಕೆ .ಅಬ್ದುಲ್ ಜಬ್ಬಾರ್ ಸಾಬ್ ಮಾತನಾಡಿ. ಅಲ್ಪಸಂಖ್ಯಾತರು ಜಾಗೃತರಾಗಬೇಕು ಶಿಕ್ಷಣ ಆರ್ಥಿಕ ಹಾಗೂ ಸಾಮಾಜಿಕ ವಾಗಿ ಬಹಳ ಹಿಂದುಳಿದಿದೆ ಕರ್ನಾಟಕ ಅಲ್ಪಸಂಖ್ಯಾತರ ಜಾಗರಣ ವೇದಿಕೆ ಹಮ್ಮಿಕೊಂಡಿರುವ ಕಾರ್ಯಕ್ರಮ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದ್ದು ಈ ರೀತಿಯ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ಹಮ್ಮಿಕೊಂಡು ಜನಗಳ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು ಬರಹಗಾರರಾದ ಶಿವ ಸುಂದರ್ ಸರ್ ಅವರು ವೇದಿಕೆ ಮುಖಾಂತರ ಮಾತನಾಡಿ ದೇಶದಲ್ಲಿ ಅತ್ಯಂತ ಹಿಂದುಳಿದ ವರ್ಗ ಆಗಿದ್ದು ಮುಂದೆ ಬರುವ ದಿನಗಳಲ್ಲಿ ಯುವಕರು ಜಾಗೃತ ರಾಗಬೇಕು ರಾಜಕೀಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು ಈ ರೀತಿಯ ಕಾರ್ಯಕ್ರಮಗಳು ಜನ ಜಾಗೃತಿ ಮೂಡಿಸಲು ಸಹಕಾರವಾಗಲಿದೆ ಎಂದು ತಿಳಿಸಿದರು