ತಾಲೂಕಿನ ಬೆಳ್ಳೂಡಿ ಗ್ರಾಮದ ಕಾಗಿನೆಲೆ ಕನಕ ಗುರು ಶಾಖಾ ಮಠದ ಚಂದ್ರಗುಪ್ತ ಮೌರ್ಯ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ೨೦೨೩-೨೪ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕ ಬಿ.ಪಿ ಹರೀಶ್ ಚಾಲನೆ ನೀಡಿದರು. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯದರ್ಶಿ ನಿಂಗಪ್ಪ, ಶೈಕ್ಷಣಿಕ ನಿರ್ದೇಶಕಿ ಶ್ರುತಿ ಇನಾಮದಾರ್, ವಿನಾಯಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ, ಪದ್ಮರಾಜ ಶ್ಯಾಮನೂರು, ಹಾವೇರಿ ಕುರುಬ ಸಮಾಜದ ಅಧ್ಯಕ್ಷರಾದ ಸಿದ್ದಣ, ನಂದಿತಾವರೆ ಗುತ್ತೆಪ್ಪ, ಸಿ.ಆರ್.ಪಿ ಚನ್ನಮ್ಮ, ಸಂಸ್ಥೆಯ ಅಂಜನೆಮ್ಮ ಕೆ, ಸಿಬ್ಬಂದಿ ಇದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.